ಸೋಮವಾರ, ಸೆಪ್ಟೆಂಬರ್ 25, 2023

ಬೆಂಗಳೂರು ಬಂದ್:ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಸೆ. 26 ಕ್ಕೆ 'ಬೆಂಗಳೂರು ಬಂದ್‌' ಕರೆಬಂದ್‌ಗೆ ವ್ಯಾಪಕ ಬೆಂಬಲ;

Bengaluru Bandh: ಬೆಂಗಳೂರಿನಲ್ಲಿ ತೀವ್ರಗೊಂಡ ಕಾವೇರಿ ಕಿಚ್ಚು, ಸೆ. 26 ರಂದು ಸ್ತಬ್ಧವಾಗಲಿದೆ ರಾಜಧಾನಿ
ಕಾವೇರಿ ವಿಚಾರದಲ್ಲಿಹಲವಾರು ದಶಕಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ನಮ್ಮನ್ನಾಳುವ ಸರಕಾರಗಳು ಈವರೆಗೆ ರಾಜ್ಯದ ರೈತರ ಹಿತ ಕಾಯುವಲ್ಲಿವಿಫಲವಾಗಿದ್ದು, ಮಂಗಳವಾರ ಬೆಂಗಳೂರು ಬಂದ್‌ಗೆ ಬೆಂಬಲ ನೀಡಲು ವಿವಿಧ ಸಂಘಟನೆಗಳು ನಿರ್ಧರಿಸಿವೆ. ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, 100 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಸಂಘ, ಓಲಾ, ಉಬರ್‌ ಚಾಲಕರು ಮತ್ತು ಮಾಲೀಕರ ಸಂಘ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ದಾಸನಪುರ ಮಾರುಕಟ್ಟೆ ಆಡಳಿತ ಮಂಡಳಿಯು ಬಂದ್‌ಗೆ ಬೆಂಬಲ ಘೋಷಿಸಿವೆ.
    
ಹೈಲೈಟ್ಸ್‌:
ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಸೆ. 26 ಕ್ಕೆ 'ಬೆಂಗಳೂರು ಬಂದ್‌' ಕರೆ
ಬಂದ್‌ಗೆ ವ್ಯಾಪಕ ಬೆಂಬಲ; ನಾಳೆ ಸ್ತಬ್ಧವಾಗಲಿದೆ ರಾಜಧಾನಿ
ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, 100 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬೆಂಗಳೂರು ಬಂದ್

ಬೆಂಗಳೂರು ಬಂದ್

ಬೆಂಗಳೂರು: ರಾಜಧಾನಿಯಲ್ಲೂ ಕಾವೇರಿ ಕಿಚ್ಚು ತೀವ್ರಗೊಂಡಿದ್ದು, ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೀಡಿರುವ 'ಬೆಂಗಳೂರು ಬಂದ್‌' ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ರಾಜಧಾನಿ ಸ್ತಬ್ಧವಾಗುವುದು ಬಹುತೇಕ ನಿಶ್ಚಿತವಾಗಿದೆ.


ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, 100 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಸಂಘ, ಓಲಾ, ಉಬರ್‌ ಚಾಲಕರು ಮತ್ತು ಮಾಲೀಕರ ಸಂಘ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ದಾಸನಪುರ ಮಾರುಕಟ್ಟೆ ಆಡಳಿತ ಮಂಡಳಿಯು ಬಂದ್‌ಗೆ ಬೆಂಬಲ ಘೋಷಿಸಿವೆ.

ಖಾಸಗಿ ಶಾಲೆಗಳ ಒಕ್ಕೂಟ ಸಹ ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದು, ರಜೆ ಘೋಷಿಸುವ ವಿಚಾರವನ್ನು ಆಯಾ ಶಾಲೆಗಳಿಗೆ ಬಿಟ್ಟಿದೆ. ಖಾಸಗಿ ಸಾರಿಗೆ ಸಂಘಟನೆಗಳು, ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಶನ್‌, ಹೋಟೆಲ್‌ ಮಾಲೀಕರ ಸಂಘ ಸಹ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಸ್‌, ಆಟೊ, ಕ್ಯಾಬ್‌, ಮಾರುಕಟ್ಟೆ ಸೇರಿದಂತೆ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಬಂದ್‌ನ ಭಾಗವಾಗಿ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.


ಸೆ.26ಕ್ಕೆ ಬೆಂಗಳೂರು ಬಂದ್‌ ಫಿಕ್ಸ್‌! ಬಸ್‌, ಆಟೋ ಟ್ಯಾಕ್ಸಿ, ಖಾಸಗಿ ಶಾಲೆ ಸೇರಿ ಹಲವು ಸಂಘಟನೆ ಸಾಥ್‌- ಏನಿರುತ್ತೆ? ಏನಿರಲ್ಲ?

ಕರ್ನಾಟಕ ಬಂದ್‌ ಮಾಡೋಣ
ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೆಲ ಸಂಘಟನೆಗಳು ಸೆ.26ರಂದು ಬೆಂಗಳೂರು ಬಂದ್‌ ಕೈಬಿಟ್ಟು, ಸೆ.29ರಂದು ಎಲ್ಲಾ ಸಂಘಟನೆಗಳು ಒಟ್ಟಾಗಿ 'ಕರ್ನಾಟಕ ಬಂದ್‌' ಮಾಡೋಣ ಎಂದಿವೆ. ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿಎಲ್ಲಾ ಸಂಘಟನೆಗಳು ಒಟ್ಟಾಗಿ 'ಕರ್ನಾಟಕ ಬಂದ್‌' ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ. ಹೀಗಾಗಿ, ಬೆಂಗಳೂರು ಬಂದ್‌ ಹಿಂಪಡೆಯಲು ಕರವೇ ಮನವಿ ಮಾಡಿದೆ. ಇದಕ್ಕೆ ಸಹಮತ ವ್ಯಕ್ತಪಡಿಸದ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಕುರುಬೂರು ಶಾಂತಕುಮಾರ್‌, 'ಮಂಗಳವಾರ ಬೆಂಗಳೂರು ಬಂದ್‌,' ನಿಶ್ಚಿತ ಎಂದಿದ್ದಾರೆ.


ವಿರೋಧವಿಲ್ಲ
ಒಂದಿಷ್ಟು ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್‌ಗೆ ನಿರ್ಧರಿಸಿದ್ದು, ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಸೋಮವಾರ ಬಂದ್‌ನ ದಿನಾಂಕ ಘೋಷಿಸಲಿದ್ದಾರೆ. ಸೆ.29 ಅಥವಾ 30ರಂದು ಕರ್ನಾಟಕ ಬಂದ್‌ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಮಾತನಾಡಿರುವ ವಾಟಾಳ್‌ ನಾಗರಾಜ್‌, ''ಬೆಂಗಳೂರು ಬಂದ್‌ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧವಿಲ್ಲ. ಅವರ ಜತೆ ಮಾತಾಡುತ್ತೇವೆ. ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್‌ ಮಾಡೋಣವೆಂದು ಮನವಿ ಮಾಡುತ್ತೇನೆ,'' ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ರಾಮನಗರ ಸಹ ಬಂದ್‌: ಕಾವೇರಿ ಹೋರಾಟಕ್ಕೆ ರೇಷ್ಮೆ ನಗರಿಯಿಂದಲೂ ಬೆಂಬಲ

''ಸೆ.26ರ ಬೆಂಗಳೂರು ಬಂದ್‌ ಹಿಂಪಡೆಯುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ಬಂದ್‌, ಕರ್ನಾಟಕ ಬಂದ್‌ ಪ್ರತ್ಯೇಕವಾಗಿ ಬೇಡವೆಂದು ಮನವಿ ಮಾಡಲಾಗಿದೆ. ಎರಡು ಬಾರಿ ಬಂದ್‌ ಮಾಡುವ ಬದಲು ಒಂದೇ ಬಾರಿ ರಾಜ್ಯ ಬಂದ್‌ ಮಾಡೋಣ. ಈ ಬಗ್ಗೆ ವಾಟಾಳ್‌ ನಾಗರಾಜ್‌ ಸೇರಿ ಎಲ್ಲಾಸಂಘಟನೆಗಳ ಜತೆ ಚರ್ಚಿಸುತ್ತೇವೆ,'' ಎಂದು ಕರವೇ ಅಧ್ಯಕ್ಷ ಪ್ರವೀಣ್‌ಶೆಟ್ಟಿ ಹೇಳಿದ್ದಾರೆ.

ವಿಕ ಸಲಹೆ
ಆಟೋ, ಟ್ಯಾಕ್ಸಿ ಸೇರಿದಂತೆ ಸಾರ್ವನಿಕ ಸಾರಿಗೆ ಸಂಚಾರ ವ್ಯತ್ಯಯ ಸಾಧ್ಯತೆ ಹಿನ್ನೆಲೆಯಲ್ಲಿ ಬೇರೆಡೆಯಿಂದ ರಾಜಧಾನಿಗೆ /ರಾಜಧಾನಿಯಿಂದ ಹೊರ ಊರಿಗೆ ಪ್ರಯಾಣ ಮುಂದೂಡುವುದು ಒಳಿತು.

* ಮಾಲ್‌ಗಳು, ಶಾಪಿಂಗ್‌ ಕಾಂಪ್ಲೆಕ್ಸ್‌ಗಳು, ಮಾರುಕಟ್ಟೆಗಳು ಸ್ವಯಂ ಪ್ರೇರಿತವಾಗಿ ಬಂದ್‌ ಆಗುವ ಸಾಧ್ಯತೆ ಕಾರಣ ಶಾಪಿಂಗ್‌ ಪ್ಲಾನ್‌ ಇದ್ದರೆ ಇಂದೇ ಮುಗಿಸಿ.


* ಶಾಲೆಗಳಿಗೆ ರಜೆ ಘೋಷಿಸಿಲ್ಲ. ಖಾಸಗಿ ಶಾಲೆಗಳ ಒಕ್ಕೂಟಗಳು ಕಪ್ಪು ಪಟ್ಟಿ ಧರಿಸಿ ನೈತಿಕ ಬೆಂಬಲವಷ್ಟೇ ನೀಡಿವೆ. ಶಾಲಾ ವ್ಯಾನ್‌ಗಳ ಓಡಾಟದ ಬಗ್ಗೆ ಶಾಲೆಯ ಆಡಳಿತ ಮಂಡಳಿ ಜತೆ ಚರ್ಚಿಸಿ.

* ಚಿತ್ರೋದ್ಯಮವೂ ಬಂದ್‌ಗೆ ಕೈಜೋಡಿಸಿರುವುದರಿಂದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಮುಚ್ಚಲಿವೆ. ಮೂವಿ ನೋಡುವ ಪ್ಲಾನ್‌ ಇದ್ದರೆ ಮುಂದೂಡಿ.


* ಆಸ್ಪತ್ರೆಗಳು, ಮೆಡಿಕಲ್‌ ಶಾಪ್‌ಗಳು, ಆ್ಯಂಬುಲೆನ್ಸ್‌ ಮುಂತಾದ ತುರ್ತು ಸೇವೆಗಳು ಎಂದಿನಂತೆ ಲಭ್ಯವಿರಲಿವೆ, ಆತಂಕ ಬೇಡ.

ಏನೆಲ್ಲಾ ಬಂದ್‌ ಆಗಲಿವೆ?
ಅಂಗಡಿ-ಮುಂಗಟ್ಟುಗಳು, ಕೈಗಾರಿಕೆಗಳು, ಆ್ಯಪ್‌ ಆಧರಿತ ಟ್ಯಾಕ್ಸಿ ಮತ್ತು ಬೈಕ್‌ ಸೇವೆ, ಆಟೋರಿಕ್ಷಾ, ಹೋಟೆಲ್‌ ಮತ್ತು ರೆಸ್ಟೊರೆಂಟ್‌, ಚಿತ್ರಮಂದಿರ, ಮಾಲ್‌ ಮತ್ತು ಮಲ್ಟಿಪ್ಲೆಕ್ಸ್‌ಗಳು, ಗೂಡ್ಸ್‌ ವಾಹನ ಸೇವೆ.


Mandya Bandh : ಸಕ್ಕರೆ ನಾಡಲ್ಲಿ ಜೋರಾದ ಕಾವೇರಿ ಹೋರಾಟ ; ಮಂಡ್ಯ, ಮದ್ದೂರು ಬಂದ್‌ಗೆ ಭಾರೀ ಬೆಂಬಲ, ಹೆದ್ದಾರಿ ತಡೆ

ಯಾವುದು ಬಂದ್‌ ಇಲ್ಲ?
ಸರಕಾರಿ ಮತ್ತು ಖಾಸಗಿ ಕಚೇರಿಗಳು, ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಆಂಬ್ಯುಲೆನ್ಸ್‌ ಮತ್ತು ಇತರೆ ತುರ್ತುಸೇವೆ.


ಬಿಜೆಪಿ ಬೆಂಬಲ ಘೋಷಣೆ
ಕಾವೇರಿ ನೀರಿನ ಸಂಬಂಧದಲ್ಲಿ ನಾನಾ ಸಂಘಟನೆಗಳು ನಡೆಸುತ್ತಿರುವ ಬೆಂಗಳೂರು ಬಂದ್‌ಗೆ ರಾಜ್ಯ ಬಿಜೆಪಿ ಬೆಂಬಲ ಘೋಷಿಸಿದೆ. ಪಕ್ಷದ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ಈ ವಿಷಯ ತಿಳಿಸಿದ್ದು, ‘‘ಮಂಗಳವಾರ ನಡೆಸಲಿರುವ ಬೆಂಗಳೂರು ಬಂದ್‌ಗೆ ನಮ್ಮ ಪಕ್ಷದ ಬೆಂಬಲವಿದೆ. ಈ ಪ್ರತಿಭಟನೆಯಲ್ಲಿನಮ್ಮ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಶಾಂತಿಯುತವಾಗಿ ಬಂದ್‌ ನಡೆಸಲಿದ್ದಾರೆ,’’ ಎಂದಿದ್ದಾರೆ.

ಐಟಿ ವಲಯವೂ ಬಂದ್‌ ಆಗಲಿದೆ
ಐಟಿ ಕನ್ನಡಿಗರ ಬಳಗದ ಮೂರೂವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ಬೈಕ್‌ ರ್ಯಾಲಿ ನಡೆಸಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಶಿವಾನಂದ್‌ ಹೇಳಿದ್ದಾರೆ.


ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಸೆ. 26ರಂದು ‘ಬೆಂಗಳೂರು ಬಂದ್’

ಇಂದು ಮಹತ್ವದ ಸಭೆ
ಕರ್ನಾಟಕ ಬಂದ್‌ ಸಂಬಂಧ ನಗರದಲ್ಲಿಸೋಮವಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿಮಹತ್ವದ ಸಭೆ ನಡೆಯಲಿದೆ. ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ಪ್ರವೀಣ್‌ಕುಮಾರ್‌ ಶೆಟ್ಟಿ, ಶಿವರಾಮೇಗೌಡ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿಎಲ್ಲಾ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಕರ್ನಾಟಕ ಬಂದ್‌ನ ದಿನಾಂಕ ನಿರ್ಧರಿಸಲಾಗುತ್ತದೆ.

ಹೊಸದಿಲ್ಲಿಯಲ್ಲಿ ಸೆ.26 ಕ್ಕೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆಯಿದೆ. ಆ ಸಭೆಗೆ ಒತ್ತಡ ತರಲು ಹಾಗೂ ರಾಜ್ಯ ಸರಕಾರಕ್ಕೆ ಬುದ್ಧಿ ಕಲಿಸಲು ಬೆಂಗಳೂರು ಬಂದ್‌ ಮಾಡಲಾಗುತ್ತಿದೆ. ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಲು ವಾಟಾಳ್‌ ನಾಗರಾಜ್‌ ಕರೆದಿರುವ ಸಭೆಗೆ ಹೋಗುತ್ತೇವೆ.

-ಕುರುಬೂರು ಶಾಂತಕುಮಾರ್‌, ಅಧ್ಯಕ್ಷರು, ಕಬ್ಬು ಬೆಳೆಗಾರರ ಸಂಘ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc